ಶುಕ್ರವಾರ, ಆಗಸ್ಟ್ 18, 2017

ಹಾಲ ಕೊಳ್ಳಿರೋ ಗೋಪಿಯರ ಮನೆಯಲ್ಲಿ |

ಜಗದೋದ್ದಾರಕನಿಗೆ ಜೋಗುಳವಾಡಿದ ಮನೆಯಲ್ಲಿ|
ಹಾಲ ಕೊಳ್ಳಿರೋ||
ಜಗದಾನಂದಕಾರನು ಬೆಣ್ಣೆ ಮೊಸರು ಕದ್ದ ಮನೆಗಳಲ್ಲಿ |
ಹಾಲ ಕೊಳ್ಳಿರೋ ||
ಜಗದೊಡೆಯನಾದ ಉಡುಪಿಯ ಕೃಷ್ಣನು ,
ನಲಿದಾಡಿದ ಮನೆಗಳಲ್ಲಿ|
ಹಾಲ ಕೊಳ್ಳಿರೋ |

ಭೂಪಾಲನನ್ನು ಆಡಿಸಿದ ಕೈಗಳು ಕರೆದ ಹಾಲು|
ಭೂಪತಿ  ,ಸಿರಿಪತಿಗೆಂದು ಕರೆದ ಹಾಲು||
ಭೂಲೋಕದೊಡೆಯ ಭಾಮೆಯ ಅರಸನ|
ಕೊಳಲಿನ ನಾದವ ಕೇಳಿ ಬಸಿದ ಹಾಲು||

ಅಭಿಲಾಷ್ ಟಿ ಬಿ
ತಿಪಟೂರು
ಶ್ರೀಕೃಷ್ಣಾರ್ಪಣ ಮಸ್ತು  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ