ಗುರುವಾರ, ಮಾರ್ಚ್ 16, 2017

ಕೊಳಲ ಊದುತ್ತಾ ಬಂದನು ,ರಂಗಯ್ಯಾ...

ಕೊಳಲ ಊದುತ್ತಾ ಬಂದನು ,ರಂಗಯ್ಯಾ...

ಕೊಳಲ ಊದುತ್ತಾ ಬಂದನು,ರಂಗಯ್ಯ|
ದಾಸರು ಕರೆದೊಡೆ||

ಪರಿ ಪರಿಯಾಗಿ ಬೇಡಿದ ದಾಸರು|
ಪದುಮನಾಭನ ಮೂರುತಿಗೆ ಪುಷ್ಪವ ಅರ್ಪಿಸಿದರು|
ಪಕ್ಷಿರಾಜ ಕೂಡೆ ಭಿನ್ನಹವ ಕಳಿಸಿದರು|
ಪಾರ್ಥಸಾರಥಿಗಾಗಿ ಗುಡಿ ಗುಡಿ ಅಲೆದರು||

ಕುಟ್ಟಿದರು ಅವಲಕ್ಕಿಯ ಆತಗೆ ಪ್ರಿಯವೆಂದು|
ಬೆಣ್ಣೆ,ಮೊಸರು ಗಡಿಗೆಗಳ ಸಾಲಗಿ ತುಂಬಿದರು ||
ಕಮಲನಾಭಗೆ ಕಾದು ಕಾದು ,ಕಂಬಕ್ಕೆ ಒರಗಿದರು||
ಕಂಬದ ಮರೆಯಿಂದ ಕೊಳಲ ಊದುತ್ತಾ ಓಡಿಬಂದನು||

ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ