ಯತಿರಾಜಗೆ ನಮಿಸೋಣ....
೧.
ನೆಂಟನು ಬಂದಿಹನು,ಮಂತ್ರಾಲಯದಿಂದ|
ಬಾಗಿಲ ತೆರೆದು ಕರೆಯಿರೆ,ಬಾಗಿಲ ತೆರೆದು ಕರೆಯಿರೆ||
ನಲಿವಿನಿಂದಿರುವಾಗ ನಲಿದಾಡುತ ಬರುವ ನೆಂಟನಲ್ಲ|
ಕಷ್ಟಗಳು ಎರಗಿದಾಗ ಗಂಟು ಕಟ್ಟಿ ಹೋಗುವ ನೆಂಟನಲ್ಲ||
ಸಂಸಾರವೆಂಬ ಬಾಳಿನ ನೌಕೆಯ|
ಶ್ರೀಹರಿಯ ಪಾದಕ್ಕೆ ಸೇರಿಸೋ ನೆಂಟನಿವನು||
ಒಪ್ಪತ್ತು,ಎರಡು ದಿನ ಇದ್ದು ಹೋಗುವ ನೆಂಟನಲ್ಲ|
ಹಬ್ಬದ ಅಡಿಗೆ ಮಾಡಿ ಬಡಿಸಲಿ ಎಂದು ಕಾಯುವ ನೆಂಟನಲ್ಲ||
ದೈನ್ಯದಿಂದ ಬೇಡಿದ ಭಕುತರ ಮನದ ಮಂದಿರದಲ್ಲಿ|
ಸಲುಹುತ್ತಾ ನಿಂತಿರುವ ನೆಂಟ ಇವನಮ್ಮಾ,ಶ್ರೀರಾಘವೇಂದ್ರರಾಯರಮ್ಮ||
೧.
ಆರತಿ ಬೆಳಗೋಣ ಮಂತ್ರಾಲಯದ ಯತಿರಾಜಗೆ|
ಬೇಡಿದ ವರಗಳಿಗೆ ಅಸ್ತು ಎನ್ನುತಿಹನು|
ನಾ ಮಾಡಿದ ಪಾಪಗಳ,ತನ್ನಲ್ಲೇ ಕರಗಿಸಿಕೊಂಡನು||
ಕರದಲ್ಲಿ ವೀಣೆಯ ಹಿಡಿದು ರಾಮನ ಧ್ಯಾನಿಸುತಿಹನು|
ಅಂತರಂಗದಲ್ಲಿ ಭಕ್ತರ ಸಂಕಟಗಳಿಗೆ ಕಿವಿಗೊಟ್ಟಿಹನು||
ನಾ ಮಾಡಿದ ಪಾಪಗಳ,ತನ್ನಲ್ಲೇ ಕರಗಿಸಿಕೊಂಡನು||
ಕರದಲ್ಲಿ ವೀಣೆಯ ಹಿಡಿದು ರಾಮನ ಧ್ಯಾನಿಸುತಿಹನು|
ಅಂತರಂಗದಲ್ಲಿ ಭಕ್ತರ ಸಂಕಟಗಳಿಗೆ ಕಿವಿಗೊಟ್ಟಿಹನು||
ನಾನು ,ನನ್ನದು ಎಂಬುವನಲ್ಲಿ ಅವರೆಲ್ಲಿವರು?
ನಾನು ಎಂಬುದು ಹೋದಡೆ ಕಣ್ಣಿಗೆ ಕಾಣಸಿಗುವರು||
ಸಂಶಯ,ಸಂದೇಹ ಬಿಟ್ಟು ರಾಯಗೆ ಆರತಿಯ ಬೆಳಗಿರೆ|
ಅಂಧಕಾರವ ಸೀಳುವ ದೀಪವ ಹಿಡಿದು ಬರುವನು ರಾಘವೇಂದ್ರರಾಯನು||
ನಾನು ಎಂಬುದು ಹೋದಡೆ ಕಣ್ಣಿಗೆ ಕಾಣಸಿಗುವರು||
ಸಂಶಯ,ಸಂದೇಹ ಬಿಟ್ಟು ರಾಯಗೆ ಆರತಿಯ ಬೆಳಗಿರೆ|
ಅಂಧಕಾರವ ಸೀಳುವ ದೀಪವ ಹಿಡಿದು ಬರುವನು ರಾಘವೇಂದ್ರರಾಯನು||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೨.
ನಿನ್ನನ್ನೇ ನಂಬಿ ಬಂದಿರುವೇ ,ಗುರುರಾಯ|
ಅಭಯ ಹಸ್ತವ ನೀಡೋ ಶ್ರೀರಾಘವೇಂದ್ರರಾಯ||
ಕನಕವು ಬೇಕಿಲ್ಲ,ಧನಕ್ಕೆ ಸಂಕಟವಿಲ್ಲ|
ಜೀವನವೇ ಮುಳ್ಳಿನ ಹಾಸಿಗೆಯಾಗಿಹುದು||
ಎನ್ನ ನಾಲಿಗೆ ಸದಾ ರಾಯ ಎನ್ನುತಿಹುದು|
ಭವಸಾಗರದಲ್ಲಿ ತೇಲಿಸೋ ಅಂಬಿಗನಾಗಿ ಬಾರಯ್ಯ||
ಜೀವನವೇ ಮುಳ್ಳಿನ ಹಾಸಿಗೆಯಾಗಿಹುದು||
ಎನ್ನ ನಾಲಿಗೆ ಸದಾ ರಾಯ ಎನ್ನುತಿಹುದು|
ಭವಸಾಗರದಲ್ಲಿ ತೇಲಿಸೋ ಅಂಬಿಗನಾಗಿ ಬಾರಯ್ಯ||
ಹೆಜ್ಜೆ ಹೆಜ್ಜೆಯೂ ಹಾದಿ ತಪ್ಪುತಿಹುದು|
ನಡು ನಡುವೂ ಕಾಣುತಿಹರು ಹಿತಶತ್ರುಗಳು||
ರಾಘವೇಂದ್ರ ಬೇರೇನೂ,ರಾಘವ ಬೇರೇನು|
ಕೈ ಹಿಡಿದು ನಡೆಸು ಎನನ್ನು ,ಶ್ರೀರಾಮನನ್ನು ಪೂಜಿಸಿದಾತನೆ||
ನಡು ನಡುವೂ ಕಾಣುತಿಹರು ಹಿತಶತ್ರುಗಳು||
ರಾಘವೇಂದ್ರ ಬೇರೇನೂ,ರಾಘವ ಬೇರೇನು|
ಕೈ ಹಿಡಿದು ನಡೆಸು ಎನನ್ನು ,ಶ್ರೀರಾಮನನ್ನು ಪೂಜಿಸಿದಾತನೆ||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೩.
ನಂಬಿ ಕೆಟ್ಟವರಿಲ್ಲವೊ ಈ ರಾಯನನ್ನು....
ರಕ್ಷಿಸೋ ಎನ್ನನು ಶ್ರೀರಾಘವೇಂದ್ರ|
ರಕ್ಷಿಸೋ ಎನ್ನನು ಶ್ರೀಗುರುರಾಯ|
ರಕ್ಷಿಸೋ ಎನ್ನನು ಶ್ರೀಗುರುರಾಯ|
ಆಳನು ನಂಬಿ ರಾಜನು ಕೆಟ್ಟಂತೆ|
ದೊರೆಯ ನಂಬಿ ಪ್ರಜೆಯು ಕೆಟ್ಟಂತೆ||
ಕಾಮಧೇನು,ಕಲ್ಪವೃಕ್ಷ ನೀನಾಗಿರುವಾಗ|
ನಿನ್ನನು ನಂಬಿ ಕೆಟ್ಟವರಿಲ್ಲಯ್ಯ ರಾಯ||
ದೊರೆಯ ನಂಬಿ ಪ್ರಜೆಯು ಕೆಟ್ಟಂತೆ||
ಕಾಮಧೇನು,ಕಲ್ಪವೃಕ್ಷ ನೀನಾಗಿರುವಾಗ|
ನಿನ್ನನು ನಂಬಿ ಕೆಟ್ಟವರಿಲ್ಲಯ್ಯ ರಾಯ||
ಕೂಡಿಟ್ಟ ಅಕ್ಕಿ ಜೊಳ್ಳು ಹಿಡಿಯಬಹುದು|
ಕೂಡಿಟ್ಟ ಗಳಿಕೆಯು ಪರರ ಪಾಲಗಬಹುದು||
ನಿನ್ನ ಅನುಗ್ರಹ ಸದಾ ನಮ್ಮ ಮೇಲೆ ಇರಲು|
ಗ್ರಹಣದ ನೆರಳೂ ಸೋಕದು ರಾಯನೇ|
ಗ್ರಹಣದ ನೆರಳೂ ಸೋಕದು ರಾಯನೇ ||
ಕೂಡಿಟ್ಟ ಗಳಿಕೆಯು ಪರರ ಪಾಲಗಬಹುದು||
ನಿನ್ನ ಅನುಗ್ರಹ ಸದಾ ನಮ್ಮ ಮೇಲೆ ಇರಲು|
ಗ್ರಹಣದ ನೆರಳೂ ಸೋಕದು ರಾಯನೇ|
ಗ್ರಹಣದ ನೆರಳೂ ಸೋಕದು ರಾಯನೇ ||
ಅಭಿಲಾಷ್ ಟಿ ಬಿ
೪.
ಅರಿವಿನ ಹರಿವು ನಿಂತಿದೆ|
ಸುಜ್ಞಾನವನ್ನು ಕರುಣಿಸೋ ಗುರುರಾಯ|
ಸುಜ್ಞಾನವನ್ನು ಕರುಣಿಸೋ ಗುರುರಾಯ|
ವೇದ ಶಾಸ್ತ್ರ,
ವಿಜ್ಞಾನದ ವಿದ್ವತ್ತು ನಲಿದಾಡುತ್ತಿದೆ|
ದಶಮಾಂಶಗಳ ಲೆಕ್ಕವೂ ಮಸ್ತಕದಲ್ಲಿ ಪುಟಿಯುತಿದೆ|
ಮಾನವೀಯತೆ,ಅಂತಃಕರಣ ಎಂಬ ಗುಣಗಳು|
ಮನದ ಬತ್ತಳಿಕೆಯಲ್ಲಿ ಬತ್ತಿ ಹೋಗಿದೆ|
ವಿಜ್ಞಾನದ ವಿದ್ವತ್ತು ನಲಿದಾಡುತ್ತಿದೆ|
ದಶಮಾಂಶಗಳ ಲೆಕ್ಕವೂ ಮಸ್ತಕದಲ್ಲಿ ಪುಟಿಯುತಿದೆ|
ಮಾನವೀಯತೆ,ಅಂತಃಕರಣ ಎಂಬ ಗುಣಗಳು|
ಮನದ ಬತ್ತಳಿಕೆಯಲ್ಲಿ ಬತ್ತಿ ಹೋಗಿದೆ|
ತರ್ಕ ಮಾಡುವವರು ಎಷ್ಟೋ ಜನ|
ನೀತಿ,ತತ್ವ ಬೋಧನೆ ಮಾಡುವವರು ಲೆಕ್ಕವಿಲ್ಲದಷ್ಟು ಜನ|
ಏನಾದರೇನು?
ಕಿಚ್ಚು,ಮದ,ಮೊದಲಾದ ಗುಣಗಳು ಆರ್ಭಟಿಸುತಿದೆ|
ನಮ್ಮನು ಮನುಷ್ಯರನ್ನಾಗಿಸೋ ಗುರುರಾಯ|
ನೀತಿ,ತತ್ವ ಬೋಧನೆ ಮಾಡುವವರು ಲೆಕ್ಕವಿಲ್ಲದಷ್ಟು ಜನ|
ಏನಾದರೇನು?
ಕಿಚ್ಚು,ಮದ,ಮೊದಲಾದ ಗುಣಗಳು ಆರ್ಭಟಿಸುತಿದೆ|
ನಮ್ಮನು ಮನುಷ್ಯರನ್ನಾಗಿಸೋ ಗುರುರಾಯ|
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೫.
ಸಂದೇಹ ಪಟ್ಟರೆ ಹೇಗಯ್ಯಾ
ಶ್ರೀರಾಮನನ್ನು ಪೂಜಿಸುವವನು ಅವನಯ್ಯಾ|
ಶ್ರೀರಾಮನನ್ನು ಪೂಜಿಸುವವನು ಅವನಯ್ಯಾ|
ದೇವ ಬಲ ಗುರುವಿನ ಬಲ
ಯಾವ ಬಲ ಬಲವಯ್ಯಾ|
ಅರ್ಜುನನಿಗೆ ಕೃಷ್ಣನ ಬಲವಿದ್ದರೂ
ದ್ರೋಣರ ವಿದ್ಯೆಯ ಬಲ ಬೇಕಿರಲಿಲ್ಲವೇನಯ್ಯ|
ಯಾವ ಬಲ ಬಲವಯ್ಯಾ|
ಅರ್ಜುನನಿಗೆ ಕೃಷ್ಣನ ಬಲವಿದ್ದರೂ
ದ್ರೋಣರ ವಿದ್ಯೆಯ ಬಲ ಬೇಕಿರಲಿಲ್ಲವೇನಯ್ಯ|
ಜೋಡೆತ್ತಿನ ಬಂಡಿ ಅಲುಗದೆ ಹೋಗುವುದೇನು|
ಕಣ್ ಕಟ್ಟಿದ ಕುದುರೆ ಅತ್ತಿತ್ತ ನೋಡುವುದೇನು|
ಜೀವನವನ್ನು ಕಷ್ಟಗಳು ಅಲುಗಿಸಿದಾಗ|
ಅತ್ತಿತ್ತ ನೋಡದೆ ಗುರುರಾಜನ ಪಾದಕ್ಕೆ ಎರಗೋ ಮನುಜ |
ಕಣ್ ಕಟ್ಟಿದ ಕುದುರೆ ಅತ್ತಿತ್ತ ನೋಡುವುದೇನು|
ಜೀವನವನ್ನು ಕಷ್ಟಗಳು ಅಲುಗಿಸಿದಾಗ|
ಅತ್ತಿತ್ತ ನೋಡದೆ ಗುರುರಾಜನ ಪಾದಕ್ಕೆ ಎರಗೋ ಮನುಜ |
ಆಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೬.
ಹರಿಯುತಿದೆ ಹರಿಯುತಿದೆ ಜೀವನದ ಹೊಳೆಯು
ರಾಯರು ತೋರಿಸಿದ ಪಥದಲ್ಲಿ ಹರಿಯುತಿದೆ ಹೊಳೆಯು|
ರಾಯರು ತೋರಿಸಿದ ಪಥದಲ್ಲಿ ಹರಿಯುತಿದೆ ಹೊಳೆಯು|
ಮು0ಜಾವಿನ ಮ0ಜಿನ0ತೆ ಪಾಪ ಕರ್ಮಗಳು ಕರಗಿ |
ಸಸಿಯಾಗಿ ಹುಟ್ಟಿತು ಜೀವವೊ0ದು ತಾಯಿ ಉದರದಲಿ |
ರಾಯ ರಾಯ ಎ0ದು ತಾಯಿ ಬಸುರಿನಲಿ ಜಪಿಸಲು |
ರಾಮ ನಾಮದಷ್ಟೆ ಹಿತವಾಗಿತ್ತು ತಾಯಿ ಒಡಲಿನಲಿ|
ಸಸಿಯಾಗಿ ಹುಟ್ಟಿತು ಜೀವವೊ0ದು ತಾಯಿ ಉದರದಲಿ |
ರಾಯ ರಾಯ ಎ0ದು ತಾಯಿ ಬಸುರಿನಲಿ ಜಪಿಸಲು |
ರಾಮ ನಾಮದಷ್ಟೆ ಹಿತವಾಗಿತ್ತು ತಾಯಿ ಒಡಲಿನಲಿ|
ದಟ್ಟ ಕಾನನದಲ್ಲಿ ಕಲ್ಲುಮುಳ್ಳಿನ ಹಾದಿಯಲ್ಲಿ ರಭಸದಿ0ದ ನುಗ್ಗಿ |
ಎತ್ತರದ ಗಿರಿ ಶಿಖರಗಳಿ0ದ ಜಲಪಾತವನ್ನು ಸೃಷ್ಟಿಸಿ ಪ್ರಪಾತಕ್ಕೆ ಬಿದ್ದಿ |
ಜೀವನವೆ0ದರೆ ತಗ್ಗಿ ಬಗ್ಗಿ ಎದ್ದಿ ಬಿದ್ದಿ |
ಮಣ್ಣ ಕೊಡವಿ ಎಬ್ಬಿಸೊ ಗುರುರಾಯ|
ಸರ್ವರಿಗೂ ಸಮಬಾಳು ನೀಡೋ ಗುರುರಾಯ
ಸರ್ವರಿಗೂ ಸಹಬಾಳ್ವೆ ಜೀವನ ನಡೆಸಿಕೊಡೊ ಗುರುರಾಜ|
ಎತ್ತರದ ಗಿರಿ ಶಿಖರಗಳಿ0ದ ಜಲಪಾತವನ್ನು ಸೃಷ್ಟಿಸಿ ಪ್ರಪಾತಕ್ಕೆ ಬಿದ್ದಿ |
ಜೀವನವೆ0ದರೆ ತಗ್ಗಿ ಬಗ್ಗಿ ಎದ್ದಿ ಬಿದ್ದಿ |
ಮಣ್ಣ ಕೊಡವಿ ಎಬ್ಬಿಸೊ ಗುರುರಾಯ|
ಸರ್ವರಿಗೂ ಸಮಬಾಳು ನೀಡೋ ಗುರುರಾಯ
ಸರ್ವರಿಗೂ ಸಹಬಾಳ್ವೆ ಜೀವನ ನಡೆಸಿಕೊಡೊ ಗುರುರಾಜ|
ಆಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೭.
ಹಿ0ಬಾಲಿಸುವ ಭಕ್ತರ ಪಾಲ
ಮ0ತ್ರಾಲಯ ವಾಸ ಶ್ರೀರಾಘವೇ0ದ್ರ |
ಮ0ತ್ರಾಲಯ ವಾಸ ಶ್ರೀರಾಘವೇ0ದ್ರ |
ಪರಮ ಸತ್ಯ ಪರಮ ನಿತ್ಯ
ಪರಮಾತ್ಮನಲ್ಲಿ ಮಿಥ್ಯವೆನ್ನುವುದೆ ಪಥ್ಯ
ಪರಮ ಗುರುವಿನ ಪಾದ ಸೇವೆಯಿ0ದ
ಪತಿತ ಪಾವನನೆಡೆಗೆ ಪಥವು ಸುಲಭ
ಪರಮಾತ್ಮನಲ್ಲಿ ಮಿಥ್ಯವೆನ್ನುವುದೆ ಪಥ್ಯ
ಪರಮ ಗುರುವಿನ ಪಾದ ಸೇವೆಯಿ0ದ
ಪತಿತ ಪಾವನನೆಡೆಗೆ ಪಥವು ಸುಲಭ
ಮ0ತ್ರವು ತಿಳಿದಿಲ್ಲ,ತ0ತ್ರವು ಮೊದಲೇ ಇಲ್ಲ
ವಾರ,ನಕ್ಷತ್ರಾದಿಗಳ ನೆನಪೇ ಇಲ್ಲ
ರಾಯರ ಸೇವೆ ಹೇಗೆ0ದು ಯೋಚಿಸಿದಾಗ
ಸ್ಮರಣೆಯೊ0ದೆ ಸಾಲದೆ ಎ0ದ ಲಕ್ಷ್ಮೀರಾಯ|
ವಾರ,ನಕ್ಷತ್ರಾದಿಗಳ ನೆನಪೇ ಇಲ್ಲ
ರಾಯರ ಸೇವೆ ಹೇಗೆ0ದು ಯೋಚಿಸಿದಾಗ
ಸ್ಮರಣೆಯೊ0ದೆ ಸಾಲದೆ ಎ0ದ ಲಕ್ಷ್ಮೀರಾಯ|
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೮.
ಸದಾ ಸ್ಮರಣೆ ಮಾಡಿರೋ
ಶ್ರೀ ರಾಘವೇಂದ್ರನನ್ನು |
ಶ್ರೀ ರಾಘವೇಂದ್ರನನ್ನು |
ಕರದಲ್ಲಿ ವೀಣೆ ,ಕೊರಳಲ್ಲಿ ತುಳಸೀಮಾಲೆ
ಹಣೆಯಲ್ಲಿ ಗೋಪಿ ಚಂದಿರನಂತೆ |
ಶಿಖೆಯಲ್ಲಿ ವಿದ್ವತ್ತು ಬೆಳಗುವ ಸೂರ್ಯನಂತೆ
ಮನದಲ್ಲಿ ಹರಿಯುತಿದೆ ಕರುಣೆ ತುಂಗೆಯಂತೆ |
ಹಣೆಯಲ್ಲಿ ಗೋಪಿ ಚಂದಿರನಂತೆ |
ಶಿಖೆಯಲ್ಲಿ ವಿದ್ವತ್ತು ಬೆಳಗುವ ಸೂರ್ಯನಂತೆ
ಮನದಲ್ಲಿ ಹರಿಯುತಿದೆ ಕರುಣೆ ತುಂಗೆಯಂತೆ |
ದ್ವೈತ ಅದ್ವೈತ ದ್ ಇಬ್ಬಂದಿ ತನದ ನಡುವೆ
ಗುರು ಪೀಠ ದಲ್ಲೊಂದು ಅರಳಿತು ಮಲ್ಲಿಗೆ |
ಗುರು ಮಹಿಮೆಯನ್ನು ಅರಿತ ಮಂಚಾಲತ್ತೆ
ತಪಸ್ಸಿಗೆ ಅನುವು ಮಾಡಿ ಕೊಟ್ಟಳು ಕಲಿಯುಗದ
ಕಲ್ಪವೃಕ್ಷನಿಗೆ ,ಶ್ರೀ ಗುರುರಾಜನಿಗೆ |
ಅಭಿಲಾಷ್ ಟಿ ಬಿ
ತಿಪಟೂರು
ಗುರು ಪೀಠ ದಲ್ಲೊಂದು ಅರಳಿತು ಮಲ್ಲಿಗೆ |
ಗುರು ಮಹಿಮೆಯನ್ನು ಅರಿತ ಮಂಚಾಲತ್ತೆ
ತಪಸ್ಸಿಗೆ ಅನುವು ಮಾಡಿ ಕೊಟ್ಟಳು ಕಲಿಯುಗದ
ಕಲ್ಪವೃಕ್ಷನಿಗೆ ,ಶ್ರೀ ಗುರುರಾಜನಿಗೆ |
ಅಭಿಲಾಷ್ ಟಿ ಬಿ
ತಿಪಟೂರು
೯.
ದಯೆ ತೋರು ಗುರುವೇ
ತುಂಗಭದ್ರ ತೀರದ ಋಷಿಯೇ ,
ತುಂಗಭದ್ರ ತೀರದ ಋಷಿಯೇ ,
ಜನನ ಮರಣಗಳ ನಡುವೆ
ನವವಿಧ ಕಷ್ಟಗಳ ಸರಮಾಲೆ
ಅಂದು ಕಾಣಿಸಿತು ದೀವಿಗೆ
ರಾಯರ ಅನುಗ್ರಹವೆಂಬ ತುಳಸಿಮಾಲೆ,
ನವವಿಧ ಕಷ್ಟಗಳ ಸರಮಾಲೆ
ಅಂದು ಕಾಣಿಸಿತು ದೀವಿಗೆ
ರಾಯರ ಅನುಗ್ರಹವೆಂಬ ತುಳಸಿಮಾಲೆ,
ಜ್ಞಾನ ವಾಹಿನಿಗೆಂದು ವಾಗ್ದೇವಿ
ಕುಬೇರನಿಗೆ ಧನ ಸಂಪತ್ತು
ಕರುಣೆ ಎಂಬುದು ಮಿಕ್ಕಿ ಉಳಿಯಿತು
ಆಗ ನೆನಪಾದರು ಶ್ರೀ ರಾಘವೇಂದ್ರ ತೀರ್ಥರು ,
ಕುಬೇರನಿಗೆ ಧನ ಸಂಪತ್ತು
ಕರುಣೆ ಎಂಬುದು ಮಿಕ್ಕಿ ಉಳಿಯಿತು
ಆಗ ನೆನಪಾದರು ಶ್ರೀ ರಾಘವೇಂದ್ರ ತೀರ್ಥರು ,
೧೦.
ರಾಯನನ್ನು ನೆನೆ ಮನವೇ
ಶ್ರೀಗುರುರಾಯನನ್ನು ನೆನೆ ಮನವೆ||
ಶ್ರೀಗುರುರಾಯನನ್ನು ನೆನೆ ಮನವೆ||
ಮಂತ್ರಾಲಯ ನಿವಾಸ
ಮಂಚಾಲಮ್ಮನವರ ಆವಾಸ
ಮನ ನೊಂದು ಬಂದವರಿಗೆ ಉಚ್ವಾಸ ನಿಶ್ವಾಸ
ಬಂದು ನೆಲೆಸಿ ನಮ್ಮ ಮನೆಗೆ ವಾಸ ||
ಮಂಚಾಲಮ್ಮನವರ ಆವಾಸ
ಮನ ನೊಂದು ಬಂದವರಿಗೆ ಉಚ್ವಾಸ ನಿಶ್ವಾಸ
ಬಂದು ನೆಲೆಸಿ ನಮ್ಮ ಮನೆಗೆ ವಾಸ ||
ವಿದುಷಕ ನೆಂದರೆ ತಪ್ಪಿಲ್ಲ
ರಾಜ ರಾಯ ಎಂದರೆ ನನಗೆ ಭಯವಿಲ್ಲ
ಅಂದು ನಿಮಗೆ ಗೋವಿಂದ ಇದ್ದ
ಇಂದು ನನಗೆ ರಾಜ ರಾಯ ಇರುವ
ಇಂದು ನನಗೆ ಗುರು ರಾಜ ಇರುವ....||
------- ಅಭಿಲಾಶ್ ತಿಪಟೂರು
ರಾಜ ರಾಯ ಎಂದರೆ ನನಗೆ ಭಯವಿಲ್ಲ
ಅಂದು ನಿಮಗೆ ಗೋವಿಂದ ಇದ್ದ
ಇಂದು ನನಗೆ ರಾಜ ರಾಯ ಇರುವ
ಇಂದು ನನಗೆ ಗುರು ರಾಜ ಇರುವ....||
------- ಅಭಿಲಾಶ್ ತಿಪಟೂರು
೧೧.
ಗುರುರಾಯರು ನೆಂಟನಾಗಿ ಬಂದರು....
ನೆಂಟನು ಬಂದಿಹನು,ಮಂತ್ರಾಲಯದಿಂದ|
ಬಾಗಿಲ ತೆರೆದು ಕರೆಯಿರೆ,ಬಾಗಿಲ ತೆರೆದು ಕರೆಯಿರೆ||
ನಲಿವಿನಿಂದಿರುವಾಗ ನಲಿದಾಡುತ ಬರುವ ನೆಂಟನಲ್ಲ|
ಕಷ್ಟಗಳು ಎರಗಿದಾಗ ಗಂಟು ಕಟ್ಟಿ ಹೋಗುವ ನೆಂಟನಲ್ಲ||
ಸಂಸಾರವೆಂಬ ಬಾಳಿನ ನೌಕೆಯ|
ಶ್ರೀಹರಿಯ ಪಾದಕ್ಕೆ ಸೇರಿಸೋ ನೆಂಟನಿವನು||
ಒಪ್ಪತ್ತು,ಎರಡು ದಿನ ಇದ್ದು ಹೋಗುವ ನೆಂಟನಲ್ಲ|
ಹಬ್ಬದ ಅಡಿಗೆ ಮಾಡಿ ಬಡಿಸಲಿ ಎಂದು ಕಾಯುವ ನೆಂಟನಲ್ಲ||
ದೈನ್ಯದಿಂದ ಬೇಡಿದ ಭಕುತರ ಮನದ ಮಂದಿರದಲ್ಲಿ|
ಸಲುಹುತ್ತಾ ನಿಂತಿರುವ ನೆಂಟ ಇವನಮ್ಮಾ,ಶ್ರೀರಾಘವೇಂದ್ರರಾಯರಮ್ಮ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ