ಕನಸಿನಲ್ಲಿ ಮದುವೆ
ಜೀವದ ಗೆಳತಿ ಜೊತೆಯಾದಳು|
ಸಂಸಾರವೆಂಬ ಬಾಳಿನ ನೌಕೆಗೆ||
ಸೋದರತ್ತೆಯ ಮಗಳಲ್ಲ,ವಧು ಪರೀಕ್ಷೆಗೂ ಹೋಗಲಿಲ್ಲ|
ಹುಡುಗ ಬರುತ್ತಿಹನೆಂದು ನಾಚಿ ಕೋಣೆಯೊಳಗೂ ಓಡಿರಲಿಲ್ಲ||
"ಶ್ರೀನಗರ" ಬಸ್ಟಾಂಡನಲ್ಲಿ ಒಟ್ಟಿಗೆ ಬಸ್ ಹತ್ತುತ್ತಿದ್ದೆವು,ಕಂಡಕ್ಟರ್ ರೈಟ್ ಹೇಳುತ್ತಿದ್ದ|
ಎಂದೋ ಮಿಲನಗೊಂಡಿದ್ದ ಮನಸ್ಸುಗಳಿಗೆ ಕುಟುಂಬಗಳೂ ರೈಟ್ ಎಂದವು||
ಇದ್ದಿಲಿನ ಮಸಿಗಿಂತಲೂ ಕಪ್ಪಲೇ ಎಂದು ಗೆಳತಿ ಕೇಳಲೂ|
ಹೃದಯದಲ್ಲಿ ಅಂತಹದೇನು ಕಾಣಲಿಲ್ಲವೆಂದಳು||
ತಿಪಟೂರಿನ ತನಕ ಹೋಗ್ಬೆಕಲ್ಲವೇ ಎಂದು ಅಜ್ಜಿ ಗೋಗರೆದಾಗ|
ಶ್ರೀರಾಮನಂತಹವನಿಗಾಗಿ ಹುಬ್ಬಳ್ಳಿಗೂ ಹೋಗಲೂ ಸಿದ್ಧವೆಂದಳು||
ರೇಷಿಮೆ ಸೀರೆ,ಮಗುಟಗಳಿಗೆ ಪುರೋಹಿತರು ಗಂಟು ಹಾಕಿದರು|
ನನ್ನ ಹೆಜ್ಜೆಯನ್ನೆ ಅನುಸರಿಸುತ್ತಾ ಅಗ್ನಿ ದೇವನಿಗೆ ನಮಸ್ಕರಿಸಿದಳು||
ಸಪ್ತಪದಿ ತುಳಿದೆವು,ಭೂಮದ ಊಟದಲ್ಲಿ ಜೊತೆಯಾಗಿ ಕುಳಿದೆವು|
"ಸಾರ್ ಮೆಜೆಸ್ಟಿಕ್ ಬಂತು " ಎಂದು ಕೂಗಿ ಕನಸಿನ ಮದುವೆಯನ್ನೂ ಕಂಡಕ್ಟರ್ ಹಾಳುಮಾಡಿದ||
Abhilash T B
Tipatooru
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ